keshavaprasadb's profile picture. Journalist. ( Views are personal)

keshavaprasad

@keshavaprasadb

Journalist. ( Views are personal)

Pinned

ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀಯುತ ವಿಶ್ವೇಶ್ವರ ಭಟ್ ಅವರು ಇತ್ತೀಚೆಗೆ ಸಿರಿವಂತಿಕೆಗೆ 100% ಸೂತ್ರಗಳು ಕೃತಿ ಬಿಡುಗಡೆ ಗೊಳಿಸಿದ ಸಂದರ್ಭ.

keshavaprasadb's tweet image. ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀಯುತ ವಿಶ್ವೇಶ್ವರ ಭಟ್ ಅವರು ಇತ್ತೀಚೆಗೆ ಸಿರಿವಂತಿಕೆಗೆ 100% ಸೂತ್ರಗಳು ಕೃತಿ ಬಿಡುಗಡೆ ಗೊಳಿಸಿದ ಸಂದರ್ಭ.

ಭಾರತದಲ್ಲಿ ಡಿಮಾನಿಟೈಸೇಶನ್‌ ಗೆ ಮೊದಲು ನಕಲಿ ನೋಟುಗಳ ಹಾವಳಿ ಮಿತಿ ಮೀರಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಕಡಿಮೆಯಾಗಿದೆ.


ಡಿಮಾನಿಟೈಸೇಶನ್‌ ಪರಿಣಾಮ ಜಿಎಸ್‌ಟಿ ಅನುಷ್ಠಾನಕ್ಕೆ ಕೂಡ ಅನುಕೂಲ ಆಯಿತು. ರಿಜಿಸ್ಟರ್‌ ಆಗಿದ್ದ ತೆರಿಗೆದಾರರ ಸಂಖ್ಯೆ ಹೆಚ್ಚತೊಡಗಿತು. ಇದು ಜಿಎಸ್‌ ಟಿ ಯಶಸ್ಸಿಗೆ ನಿರ್ಣಾಯಕವಾಗಿತ್ತು. ಈಗ ತಿಂಗಳಿಗೆ ಸರಾಸರಿ 1 ಲಕ್ಷದ 80 ಸಾವಿರ ಕೋಟಿಗೂ ಹೆಚ್ಚು ಜಿಎಸ್‌ ಟಿ ಕಲೆಕ್ಷನ್‌ ಆಗುತ್ತಿರುವುದನ್ನು ಕಾಣಬಹುದು


2016ರಲ್ಲಿ ಭಾರತದ ನೇರ ತೆರಿಗೆ ಸಂಗ್ರಹ : 8 ಲಕ್ಷದ 47 ಸಾವಿರ ಕೋಟಿ ರುಪಾಯಿ. 2024ರಲ್ಲಿ ಭಾರತದ ನೇರ ತೆರಿಗೆ ಸಂಗ್ರಹ : 19 ಲಕ್ಷದ 58 ಸಾವಿರ ಕೋಟಿ ರುಪಾಯಿ


ಡಿಮಾನಿಟೈಸೇಶನ್‌ ಬಳಿಕ ನೇರ ತೆರಿಗೆದಾರರ ಸಂಖ್ಯೆ ಗಣನೀಯವಾಗಿ ವೃದ್ಧಿಸಿತು. ಕೋಟ್ಯಂತರ ಮಂದಿ ಐಟಿ ರಿಟರ್ನ್‌ ಸಲ್ಲಿಸತೊಡಗಿದರು. 2026-17 ಒಂದರಲ್ಲೇ 1 ಕೋಟಿ 26 ಲಕ್ಷ ಮಂದಿ ಐಟಿ ರಿಟರ್ನ್‌ ಸಲ್ಲಿಸಿದ್ದರು. ಪ್ರತಿ ವರ್ಷ ಇದು ಹೆಚ್ಚತೊಡಗಿತು.


ಭಾರತದ ಅನೌಪಚಾರಿಕ ಅರ್ಥ ವ್ಯವಸ್ಥೆ ಕ್ರಮೇಣ ಔಪಚಾರಿಕವಾಗತೊಡಗಿತು. ಕೋಟ್ಯಂತರ ಮಂದಿ ಬ್ಯಾಂಕ್‌ ಅಕೌಂಟ್‌, ಯುಪಿಐ ಅನುಕೂಲ ಪಡೆದರು. ಅವರ ಆದಾಯ, ಖರ್ಚು, ಹೂಡಿಕೆಯ ವಿವರಗಳು ಡಿಜಿಟಲೀಕರಣವಾಗಿ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯವೂ ಅವರಿಗೆ ಸಿಗತೊಡಗಿತು. ಈ ರೀತಿ ಇಕಾನಮಿ ಫಾರ್ಮಲ್‌ ಆಗತೊಡಗಿತು.


2016ರ ನವೆಂಬರ್‌ನಲ್ಲಿ 3 ಲಕ್ಷ ಡಿಜಿಟಲ್‌ ಟ್ರಾನ್ಸಕ್ಷನ್‌ ನಡೆದಿತ್ತು. ಇದರ ಮೌಲ್ಯ 90 ಕೋಟಿ ರುಪಾಯಿ. ಡಿಸೆಂಬರ್‌ನಲ್ಲಿ ಇದು 480 ಕೋಟಿಗೆ ಏರಿಕೆಯಾಗಿತ್ತು. ಆದರೆ- 2024ರಲ್ಲಿ ಪ್ರತಿ ತಿಂಗಳಿಗೆ ಡಿಜಿಟಲ್‌ ಟ್ರಾನ್ಸಕ್ಷನ್‌ 170 ಕೋಟಿ. ಮೊತ್ತ : 443 ಲಕ್ಷ ಕೋಟಿ ರುಪಾಯಿ.


ಡಿಮಾನಿಟೈಸೇಶನ್‌ ಬಳಿಕ ಭಾರತದಲ್ಲಿ ಡಿಜಿಟಲ್‌ ಟ್ರಾನ್ಸಕ್ಷನ್‌ಗಳು ವೃದ್ಧಿಸಿತು. ನೋಟುಗಳು ಇಲ್ಲದಿದ್ದರೂ, ಯುಪಿಐಗಳ ಮೂಲಕ ಹಣ ಕಳಿಸಬಹುದು ಎಂಬುದು ಜನರಿಗೆ ಮನದಟ್ಟಾಗತೊಡಗಿತು. ಪೇಟಿಎಂ, ಫೋನ್‌ಪೇ ಜನಪ್ರಿಯವಾಯಿತು. ಜನ ಇವುಗಳಿಗೆ ಒಗ್ಗಿಕೊಂಡರು. ಇದು ಭಾರತದ ಇಕಾನಮಿಯ ಚಿತ್ರಣವನ್ನೇ ಇವತ್ತು ಸಕಾರಾತ್ಮಕವಾಗಿ ಬದಲಿಸಿದೆ.


ಸ್ವಾತಂತ್ರ್ಯ ವನ್ನು ಬಯಸಿ, ಐಷಾರಾಮಿಯನ್ನಲ್ಲ. ಸ್ವಪ್ರತಿಷ್ಠೆ ದೂರವಿಡಿ, ಸಂಪತ್ತು ರಕ್ಷಣೆಯಾಗಿ ಉಳಿಯುತ್ತದೆ. ಸ್ವಾತಂತ್ರ್ಯ ಎಂದರೆ ಸಣ್ಣ ಶಿಸ್ತು ಬದ್ಧ ನಿರ್ಧಾರಗಳು.


ಮೌಲ್ಯಕ್ಕಾಗಿ ನಿಮಗೆ ದುಡ್ಡು ಕೊಡುತ್ತಾರೆಯೇ ಹೊರತು ಗಂಟೆಗಳಿಗೆ ಅಲ್ಲ. ದಿನ ನಿತ್ಯದ ಅಭ್ಯಾಸಗಳು ಭವಿಷ್ಯವನ್ನು ರೂಪಿಸುತ್ತದೆ.


ಶ್ರೀಮಂತರಂತೆ ಕಾಣಿಸದಿರಿ, ಶ್ರೀಮಂತರಾಗಿ. ಸಂಪತ್ತು ಸದ್ದಿಲ್ಲದೆ ಸೃಷ್ಟಿಯಾಗುತ್ತದೆ.


ನಿಮ್ಮ ವೆಚ್ಚಗಳನ್ನು ನಿಯಂತ್ರಣದಲ್ಲಿರಿಸಿ, ಇಲ್ಲದಿದ್ದರೆ ಅದೇ ನಿಮ್ಮನ್ನು ನಿಯಂತ್ರಿಸುತ್ತದೆ.


ಹಣ ನಿಮ್ಮನ್ನು ಬದಲಾಯಿಸುವುದಿಲ್ಲ, ಬಹಿರಂಗಪಡಿಸುತ್ತದೆ.


ದೇಶದ ಜಿಡಿಪಿಗೆ ಆಟೊಮೊಬೈಲ್‌ ಇಂಡಸ್ಟ್ರಿಯ ಕೊಡುಗೆ 7.1% ಇದೆ. 3.5 ಕೋಟಿಗೂ ಹೆಚ್ಚು ಮಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗ ಕೊಟ್ಟಿದೆ. ಇಂಡಸ್ಟ್ರಿಯ ವಾರ್ಷಿಕ ಟರ್ನೋವರ್‌ 20 ಲಕ್ಷ ಕೋಟಿ ರುಪಾಯಿ ಆಗಿದೆ.


ವಾಹನಗಳಿಗೆ ಜಿಎಸ್‌ಟಿ ರೇಟ್‌ ಕಡಿತವಾಗಿರುವುದು, ಹಬ್ಬದ ಸೆಂಟಿಮೆಂಟ್‌ ಪ್ರಭಾವ ಬೀರಿತ್ತು. ಅಕ್ಟೋಬರ್‌ ನಲ್ಲಿ 5 ಲಕ್ಷದ 57 ಸಾವಿರದ 373 ವಾಹನಗಳು ರಿಜಿಸ್ಟ್ರೇಶನ್‌ ಆಗಿದೆ.


ಕಳೆದ ತಿಂಗಳು ಅಕ್ಟೋಬರ್‌ನಲ್ಲಿ ಭಾರತದಲ್ಲಿ ಸಾರ್ವಕಾಲಿಕ ದಾಖಲೆಯ ಮಟ್ಟದಲ್ಲಿ ಆಟೊಮೊಬೈಲ್‌ ಸೇಲ್ಸ್‌ ಆಗಿದೆ. ಕಾರುಗಳು ಮತ್ತು ಬೈಕ್‌, ಸ್ಕೂಟರ್‌ಗಳನ್ನು ಜನ ಭಾರಿ ಸಂಖ್ಯೆಯಲ್ಲಿ ಖರೀದಿಸಿದ್ದಾರೆ. ಅಕ್ಟೋಬರ್‌ನಲ್ಲಿ ದೇಶದಲ್ಲಿ ಒಟ್ಟು 40 ಲಕ್ಷ ವಾಹನಗಳನ್ನು ಜನರು ಖರೀದಿಸಿದ್ದಾರೆ.


ಭಾರತದಲ್ಲಿ ವಿಶ್ವ ದರ್ಜೆಯ ಬ್ಯಾಂಕ್‌ಗಳ ನಿರ್ಮಾಣಕ್ಕೆ ಪೂರಕವಾದ ವಾತಾವರಣ ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.


ಸಾರ್ವಜನಿಕ ಬ್ಯಾಂಕ್‌ಗಳ ಮತ್ತೊಂದು ಸುತ್ತಿನ ಮಹಾ ವಿಲೀನಕ್ಕೆ ಸಿದ್ಧತೆ ನಡೆಯುತ್ತಿದೆ.


ದೇಶ ಇವತ್ತು 5 ಟ್ರಿಲಿಯನ್‌ ಡಾಲರ್‌ ಇಕಾನಮಿಯಾಗುವ ಗುರಿಯನ್ನು ಹೊಂದಿದೆ. ಇದಕ್ಕೆ ಬಲಾಢ್ಯ ಬ್ಯಾಂಕ್‌ಗಳು ಅಗತ್ಯವಾಗಿದೆ.


ವಿಲೀನದ ಬಳಿಕ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಲಾಭದ ಹಳಿಗೆ ಮರಳಿವೆ. ಸಾಲ ವಿತರಣೆಯ ಗ್ರೋತ್ ರೇಟ್‌ 15% ಕ್ಕೆ ಏರಿಕೆ ಆಗಿದೆ. ಪಬ್ಲಿಕ ಸೆಕ್ಟರ್‌ ಬ್ಯಾಂಕ್‌ ಗಳು 2023-24ರಲ್ಲಿ 1 ಲಕ್ಷದ 40 ಸಾವಿರ ಕೋಟಿ ರುಪಾಯಿ ಲಾಭ ಗಳಿಸಿವೆ. ಇದು ಭಾರತದ ಆತ್ಮ ವಿಶ್ವಾಸ ಮತ್ತು ಸ್ಥಿರತೆಯನ್ನು ಬಿಂಬಿಸಿದೆ.


Loading...

Something went wrong.


Something went wrong.